Posts

Showing posts from July, 2025

ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ!

Image
 ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ! ಅದು ದಿನಾಂಕ 24 ಎಪ್ರಿಲ್,1990. ನಮ್ಮ ಕರಾವಳಿಯಲ್ಲಿ ಬೇಸಗೆಯ ಕಾಲ. ಆ ದಿನ ದೇಶದ ರೈಲ್ವೆ ಇತಿಹಾಸದ ದಾಖಲೆ ಪುಟಗಳಲ್ಲಿ ಸೇರಿದ ದಿನ. ಅಂದುಮಂಗಳೂರಿನಿಂದ ಜಮ್ಮು ತಾವಿ ತನಕ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾವಿರಾರು ಜನರನ್ನು ಹೊತ್ತುಕೊಂಡು ಹೋದ ರೈಲೊಂದು ಆರಂಭಗೊಂಡಿತು. ಅಷ್ಟು ಮಾತ್ರವಲ್ಲದೆ ದೇಶದ ನಾಲ್ಕನೆಯ ಉದ್ದದ ರೈಲು ಎಂಬ ಕೀರ್ತಿಯನ್ನು ಪಡೆಯಿತು. ಭಾರತೀಯ ರೈಲ್ವೆ ಜಾಲದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿತು. ಇದು ಬೇರೆ ಯಾವ ರೈಲು ಅಲ್ಲ ಇದುವೇ ಹೊಸ ಯುಗಕ್ಕೆ ನಾಂದಿ ಹಾಡಿದ ನಮ್ಮ ಹೆಮ್ಮೆಯ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರ "ನವಯುಗ ಎಕ್ಸ್‌ಪ್ರೆಸ್" ರೈಲು. ಸೋಮವಾರ ಬಂತೆಂದರೆ ಸಂಜೆ ಸೂರ್ಯ ಕಡಲಿನಲ್ಲಿ ಅಸ್ತಮಗೊಳ್ಳುವ ಸಮಯಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಒಂದು ರೈಲಿನ ಉಗಿಬಂಡಿಯ ಅಬ್ಬರದ ಸದ್ದು ಕೇಳುತ್ತಿತ್ತು. ತಾನು ಹೋಗಿ ಬರುತ್ತೇನೆ, ಎಷ್ಟೋ ಜನರನ್ನು ತನ್ನೊಡಲಿನಲ್ಲಿ ಕುಳ್ಳಿರಿಸಿ ಸುರಕ್ಷಿತವಾಗಿ ಅವರ ಸ್ಥಾನಕ್ಕೆ ಬಿಟ್ಟು ಮರಳಿ ಬರುವಾಗ ಮತ್ತೆ ಸಾವಿರಾರು ಜನರನ್ನು ಕರೆದುಕೊಂಡು ಬರುತ್ತೇನೆ ಎನ್ನುತ್ತಾ ಮಂಗಳೂರು ಸೆಂಟ್ರಲಿನಿಂದ ಸಂಜೆ 5 ಗಂಟೆಗೆ ಹೊರಡುತ್ತಿದ್ದ ಈ ರೈಲು ಮಂಗಳೂರಿನಿಂ...

ವೀರ ಚಂದ್ರಹಾಸ! ದೊಡ್ಡಪರದೆಯಲ್ಲಿ ಕರಾವಳಿಯ ಗಂಡುಕಲೆಯ ಅಬ್ಬರ! ಹೇಗಿದೆ ಈ ಸಿನಿಮಾ!?

Image
ವೀರ ಚಂದ್ರಹಾಸ! ದೊಡ್ಡಪರದೆಯಲ್ಲಿ ಕರಾವಳಿಯ ಗಂಡುಕಲೆಯ ಅಬ್ಬರ! ಹೇಗಿದೆ ಈ ಸಿನಿಮಾ!?    ಈಗಷ್ಟೆ ವೀರ ಚಂದ್ರಹಾಸ ಸಿನಿಮಾವನ್ನು ಅಮೆಜಾನ್ ಪ್ರೈಮಿನಲ್ಲಿ ನೋಡಿದೆ. ಈ ಸಿನಿಮಾ ಬಗ್ಗೆ ನಾನು ಬಿಡುಗಡೆಗೊಳ್ಳುವ ಸಮಯದಲ್ಲಿ ತಿಳಿದಿದ್ದರೂ ಕಾರಣಾಂತರಗಳಿಂದ ಚಿತ್ರಮಂದಿರಕ್ಕೆ ಹೋಗಿ ನೋಡಲು ಆಗರಿಲಿಲ್ಲ. ನಂತರ ಅಮೆಜಾನ್ ಪ್ರೈಮಿನಲ್ಲಿ ಬಿಡುಗಡೆಗೊಂಡ ಬಗ್ಗೆ ನನಗೆ ಗೊತ್ತಿರಲಿಲ್ಲ. ಇಂದು ಇನ್ಟಾಗ್ರಾಮಿನಲ್ಲಿ ರೀಲ್ಸ್ ನೋಡುತ್ತಿದ್ದಾಗ ಈ ಚಿತ್ರದ ಒಂದು ತುಣುಕನ್ನು ನಾನು ನೋಡಿದೆ. ಮದನ ರಾಜ್ಯವನ್ನು ಆಳುವ ಸನ್ನಿವೇಶ ಅದು. ಕಡಬಾಳರ ಅಭಿನಯ. ತಕ್ಷಣ ನಾನು ಗೂಗಲಿನಲ್ಲಿ ಚಿತ್ರದ ಬಗ್ಗೆ ಹುಡುಕಿದೆ. ಅಮೆಜಾನ್ ಪ್ರೈಮಿನಲ್ಲಿ ಇರುವುದು ಗೊತ್ತಾಯಿತು. ಕೂಡಲೆ ಪ್ರೈಮಿಗೆ ಹೋಗಿ ಸಿನಿಮಾ ನೋಡಲು ಕೂತ ನಾನು ಈಗ ನೋಡಿ ಮುಗಿಸಿದೆ. ಯಕ್ಷಗಾನವನ್ನು ಸಿನಿಮಾದಲ್ಲಿ ನೋಡುವ ಒಂದು ಖುಷಿಯೇ ಬೇರೆ! ಕಥೆಯ ಬಗ್ಗೆ ಹೇಳುವುದಾದರೆ ಇದು ನಮಗೆ ಯಕ್ಷಗಾನದಲ್ಲಿರುವ ಚಂದ್ರಹಾಸ ಚರಿತ್ರೆ ಪ್ರಸಂಗವನ್ನು ಸಿನಿಮಾದಲ್ಲಿ ಯಕ್ಷಗಾನ ಶೈಲಿಯಲ್ಲಿ ತೋರಿಸಿದ್ದಾರೆ. ಆದರೆ ನಾನು ಈ ಹಿಂದೆ ಯಕ್ಷಗಾನ ಬಯಲಾಟದಲ್ಲಿ ನೋಡಿದಾಗ ಚಂದ್ರಹಾಸನ ಪೂರ್ವ ಇತಿಹಾಸ ಅಂದರೆ ಬಾಲಕನಾಗಿದ್ದಾಗ ಇದ್ದ ರೀತಿಯ ಬಗ್ಗೆ ನಾನು ತಿಳಿದಿರಲಿಲ್ಲ. ಇದು ಈ ಸಿನಿಮಾದ ಮೂಲಕ ನಾನು ತಿಳಿದುಕೊಂಡೆ. ಇದರ ಜೊತೆಗೆ ಶಿವ ಪುಟ್ಟಸ್ವಾಮಿಯ ಬಗ್ಗೆಯೂ ತಿಳಿದುಕೊಂಡದ್ದು ಸಿನಿಮಾದಲ್ಲಿಯೇ. ಇನ್ನು ರವಿ ಬಸ್ರೂರು ...