Posts

Showing posts from July, 2022

ಡಾ.ಕೆ.ಶಿವರಾಮ ಕಾರಂತರ "ಬೆಟ್ಟದ ಜೀವ" ಪುಸ್ತಕದ ಬಗ್ಗೆ ನನ್ನ ಅನಿಸಿಕೆಗಳು!

Image
  ಬೆಟ್ಟದ ಜೀವ- ಡಾ. ಕೆ. ಶಿವರಾಮ ಕಾರಂತ ಪುಸ್ತಕ ಪ್ರಕಾಶಕರು- ಸಪ್ನ ಪ್ರಕಾಶನ ಕಾರಂತಜ್ಜ  ಬರೆದ ಕಾದಂಬರಿಗಳಲ್ಲಿ ನಾನು ಓದುತ್ತಿರುವ ಮೊದಲ ಕಾದಂಬರಿ "ಬೆಟ್ಟದ ಜೀವ". ಈ ಕಾದಂಬರಿಯ ಬಗ್ಗೆ ನನ್ನ ಪ್ರೌಢಶಾಲಾ ದಿನಗಳಲ್ಲಿ ನನ್ನ ಕನ್ನಡ ಗುರುಗಳು ಹೇಳುವುದನ್ನು ಕೇಳಿದ್ದೆ. ಹೀಗೆ ಪುಸ್ತಕ ತರಿಸಿ ಓದಿಯೇ ಬಿಟ್ಟೆ. ಶಿವರಾಮರು ಕಳೆದು ಹೋದ ತನ್ನ ಎಮ್ಮೆಯನ್ನು ಹುಡುಕುತ್ತ ಸುಬ್ರಹ್ಮಣ್ಯಕ್ಕೆ ಹೋದವರು ಮರಳಿ ಬರುವಾಗ ದಾರಿ ತಪ್ಪಿ ಸುಳ್ಯ ರಸ್ತೆಯಲ್ಲಿ ಗುತ್ತಿಗಾರು ಸಮೀಪ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾದಂಬರಿಯಲ್ಲಿ ಬರುವ ಮೊದಲ ವ್ಯಕ್ತಿ ದೇರಣ್ಣನನ್ನು ಕಂಡು,ಅವನ ಮೂಲಕ ತಾನು ಹೋಗುತ್ತಿರುವ ದಾರಿ ತಪ್ಪಿದ್ದು ಗೊತ್ತಾಗಿ ಮೊದಲೇ ದಣಿವಾಗಿದ್ದ ಅವರು ದೇರಣ್ಣನ ಬಳಿ ವಿಶ್ರಾಂತಿಗೆ ಎಲ್ಲಿಯಾದರೂ ಸ್ಥಳ ಸಿಗಬಹುದೇ ಎಂದು ಕೇಳುತ್ತಾರೆ. ನಂತರ ದೇರಣ್ಣ ಅವರ ಊರಿನ ದೊಡ್ಡ ವ್ಯಕ್ತಿ ಎಂದು ಹೇಳಬಹುದಾದ ಗೋಪಾಲಯ್ಯನವರ ಬಳಿ ಕರೆದುಕೊಂಡು ಹೋಗುತ್ತಾರೆ. ದಣಿವಾಗಿದ್ದ,ಯಾವುದೋ ಒಂದು ಊರಿನಿಂದ ಬಂದ ವ್ಯಕ್ತಿಗೆ ಆಶ್ರಯ ನೀಡುವ ಮನಸ್ಸಾಗಿ ಶಿವರಾಮರನ್ನು ಉಪಚರಿಸಿ,ಆಶ್ರಯ ನೀಡುತ್ತಾರೆ. ಇಲ್ಲಿಂದ ಕಾರಂತರ ಹಾಗು ಗೋಪಾಲಯ್ಯನವರ ನಡುವೆ ಆರಂಭಗೊಳ್ಳುವ ಒಡನಾಟ,ಪ್ರೀತಿ ಕಾದಂಬರಿಯ ಕೊನೆತನಕ ಗಮನಿಸಬಹುದು. ಗೋಪಾಲಯ್ಯನವರ ಬಗ್ಗೆ ಹೇಳುವುದಾದರೆ ಗೋಪಾಲಯ್ಯನವರು ಅರುವತ್ತು ವಸಂತವನ್ನು ಪೂರೈಸಿದ ಹಿರಿಯರು. ತಮ್ಮ ಪತ್ನಿ ಶಂಕರಿಯೊ

ಅಮರಾವತಿ ಪುಸ್ತಕದ ಅವಲೋಕನ,ನನ್ನ ಅನಿಸಿಕೆಗಳು

Image
ಅಮರಾವತಿ- ನಾ ಕಾರಂತ ಪೆರಾಜೆ ಪುಸ್ತಕದ ಲೇಖಕಾರದ ನಾ ಕಾರಂತ ಪೆರಾಜೆ ಅವರನ್ನು ನಾನು ಮದ್ದಳೆ ಅಭ್ಯಾಸಕ್ಕೆಂದು ತರಗತಿಗೆ ಹೋಗುತ್ತಿರುವಾಗ ಅಲ್ಲಿ ನಡೆಯುತ್ತಿದ್ದ ತಿಂಗಳ ತಾಳಮದ್ದಳೆಗೆ ಅರ್ಥಧಾರಿಯಾಗಿ ಬರುತ್ತಿದ್ದರು ಹಾಗು ಎಷ್ಟೋ ಸಲ ಅವರ ಅರ್ಥವನ್ನು ಕೇಳಿ ಆನಂದಪಟ್ಟಿದ್ದೇನೆ. ಹೀಗೆ ಕಳೆದ ವಾರ ಮರಿಕೆ ಸಾವಯವ ಮಳಿಗೆಗೆ ಹೋದಾಗ ಅಮರಾವತಿ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ತಕ್ಷಣ ಅಮ್ಮನ ಬಳಿ ಬೇಡಿ ಪುಸ್ತಕ ತೆಗೆದುಕೊಂಡೆ.  ಅಮರಾವತಿ ಪುಸ್ತಕದಲ್ಲಿ ಯಕ್ಷರಂಗದಲ್ಲಿ ವಿಜೃಂಭಿಸಿ,ಕಲಾಮಾತೆಯ ಸೇವೆಗೈದು,ಈಗ ದೇವರ ಪಾದ ಸೇರಿರುವ ಮಹಾನ್ ಕಲಾವಿದರ ಬಗ್ಗೆ ಪರಿಚಯ,ವಿವರ,ಅವರ ಸಂದರ್ಶನಗಳನ್ನು ಕೂಡಿದೆ. ಪ್ರಥಮದಲ್ಲಿ ಸ್ವತ ಭಾಗವತರಾಗಿದ್ದು,ಹಲವಾರು ಕಲಾವಿದರನ್ನು ಬೆಳೆಸಿ,ಮೇಳವನ್ನು ಕಟ್ಟಿ,ಜೊತೆಗೆ ಗೋಪಾಲಕೃಷ್ಣನ ಸೇವೆ ಮಾಡಿದ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳ ಬಗ್ಗೆ ಪುಸ್ತಕದಲ್ಲಿ ತಿಳಿದುಕೊಳ್ಳಬಹುದು. ಯಾರೇ ಎಡನೀರು ಮಠಕ್ಕೆ ಬರಲಿ,ಅವರನ್ನು ಉಪಚರಿಸಿ,ತಿಂಡಿ-ಊಟ ಉಪಚಾರ ಮಾಡಿಯೇ ಕಳುಹಿಸುತ್ತಿದ್ದವರು ಎಡನೀರು ಶ್ರೀಗಳು. ಅವರ ಭಾಗವತಿಕೆಯನ್ನು ಮುಖತಃ ನೋಡಿ ಕೇಳುವ ಭಾಗ್ಯ ನನಗಿಲ್ಲದಿದ್ದರೂ ಈಗಿನ ಕಾಲದ ತಂತ್ರಜ್ಞಾನದ ಸಹಾಯದಿಂದ ಯೂಟ್ಯೂಬಿನಲ್ಲಿ ಕೇಳಿ ಆನಂದಿಸಿದ್ದೇನೆ. ಬ್ರಹ್ಮೈಕ್ಯರಾದ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ತದನಂತರ ಯಕ್ಷರಂಗದಲ್ಲಿ ಅದರಲ್ಲಿಯೂ ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರುಮಾಡಿ

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

Image
ಕಳೆದ ವಾರ ನಾನು ವಿಜಯವಾಣಿ ಪತ್ರಿಕೆಯಲ್ಲಿ "ಮಂಗಳೂರಿನಿಂದ ವಾರಣಾಸಿ ರೈಲಿಗೆ ಕಾರ್ಯಯೋಜನೆ" ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾದ ವರದಿಯನ್ನು  ಓದಿದೆ. ಇದು ಆರಂಭವಾದರೆ ಕರಾವಳಿ,ಮಧ್ಯ,ಉತ್ತರ ಕರ್ನಾಟಕದ ಎಷ್ಟೋ ಜನರಿಗೆ ಉಪಯೋಗವಾಗುವುದು ಅಂತು ಸತ್ಯ. ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಆ ವರದಿಯನ್ನು "D.K District Railway Users" ಎಂಬ ಟ್ವಿಟರ್ ಖಾತೆಯಲ್ಲಿ ಹಂಚಲ್ಪಟ್ಟ ನಂತರ ಒಂದು ದಿನ ಕರ್ನಾಟಕದಲ್ಲಿ ಸಂಚಲನ ಮೂಡಿಸಿತ್ತು ಹಾಗು ಸಾವಿರಾರು ಜನರಿಂದ ಅಪೂರ್ವ ಬೆಂಬಲ ವ್ಯಕ್ತವಾಗಿತ್ತು.  ಹಾಗಾದರೆ ಈ ರೈಲಿಗೆ ಅಷ್ಟೊಂದು ಬೇಡಿಕೆ ಯಾಕೆ? ಅವಶ್ಯಕತೆಯಾದರು ಏನು? ಎಂಬುವುದನ್ನು ಸ್ವಲ್ಪ ನೋಡೋಣ ಬನ್ನಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಮಂಗಳೂರು ದಕ್ಷಿಣ ಭಾರತದಲ್ಲಿ ವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿ ಒಂದು. ಧಾರ್ಮಿಕ,ಶೈಕ್ಷಣಿಕ,ವಾಣಿಜ್ಯ ಹಾಗು ಪ್ರವಾಸಿ ತಾಣವಾಗಿರುವ ಮಂಗಳೂರು ಕರ್ನಾಟಕದ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದಿದೆ. ಭಾರತದ ಅತ್ಯುತ್ತಮ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ ಸಾಲಿನಲ್ಲಿ ಮಂಗಳೂರಿನ ಸುರತ್ಕಲ್ ಅಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ಎರಡನೆಯ ಸ್ಥಾನ ಪಡೆದಿದೆ. ಮಂಗಳೂರಿನಲ್ಲಿರುವ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ,ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಕುದ್ರೋಳಿ ಶ್ರೀ ಗೋಕರ್ಣನಾಥೇ

ಗುರು ಸ್ಮರಣೆ!

Image
ನನಗೆ ಹಲವು ಮಂದಿಯಿಂದ ನಾನು ಬರೆಯುವ ಲೇಖನಗಳ ಬಗ್ಗೆ ಪ್ರತಿಕ್ರಿಯೆ ಬಂತು. ನಾನು ಇಂದು ಕನ್ನಡದಲ್ಲಿ ನೀವು ತಿಳಿಸಿದ ಹಾಗೆ ಉತ್ತಮ ರೀತಿಯಲ್ಲಿ ಲೇಖನ ಬರೆಯುತ್ತೇನೋ ಅದರ ಶ್ರೇಯಸ್ಸು ಸಲ್ಲಬೇಕಾದದ್ದು ಆ ಮಹಾನ್ ಗುರುಗಳಿಗೆ. ಯಾರೆಂದು ಯೋಚನೆಯಲ್ಲಿದ್ದೀರಾ? ಅವರು ತರಗತಿಗೆ ಬಂದರೆ ಸಾಕು ಸಂಪೂರ್ಣ ಕನ್ನಡ ಲೋಕವೇ ಆ ತರಗತಿಗೆ ಬಂದ ಹಾಗೆ ಆಗುತ್ತದೆ. ಕನ್ನಡ ಸರಿಯಾಗಿ ಗೊತ್ತಿಲ್ಲದವನೂ ಅವರು ಮಾಡುವ ಪಾಠವನ್ನು ಅರ್ಥ ಮಾಡಿಕೊಳ್ಳಬಹುದಾಗಿತ್ತು. ಅವರು ಆ ಪಾಠವನ್ನು ತಮ್ಮ ದಾಟಿಯಲ್ಲಿ ವಿವರಿಸಲು ಆರಂಭಿಸಿದರೆ ಅದು ನಮ್ಮ ತಲೆಯಲ್ಲಿ ಅದರ ಚಿತ್ರವನ್ನು ಕಲ್ಪಿಸಿಕೊಳ್ಳಬಹುದಾಗಿತ್ತು. ಅವರು ಸಾವಿರರು ವಿದ್ಯಾರ್ಥಿಗಳಿಗೆ "ಕನ್ನಡ"ವನ್ನು ಬೋಧಿಸಿದ ಮಹಾನ್ ಗುರುಗಳು. ಅವರು ಯಾರೆಂದರೆ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇಲ್ಲಿ ೩೬ ವರ್ಷಗಳ ಕಾಲ ಕನ್ನಡ ಉಪಾಧ್ಯಾಯರಾಗಿ ಜೊತೆಗೆ ೪ ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ನನ್ನ ಪ್ರೀತಿಯ "ರೂಪಕಲಾ" ಮೇಡಂ. ಇಂದು "ಗುರು ಪೂರ್ಣಿಮೆ". ಈ ಶುಭ ದಿನದಂದು ನಾನು ಅವರನ್ನು ಸ್ಮರಿಸುವುದು ನನ್ನ ಕರ್ತವ್ಯ.  ಬೆಳಗಿನ ಸುಂದರ ವಾತಾವರಣದಲ್ಲಿ ಶಾಲೆ ಆರಂಭಗೊಂಡರೆ ಸಾಕು ವಿದ್ಯಾರ್ಥಿಗಳು ಬಂದೊಡನೆ ಶಾಲೆಯಲ್ಲಿ ಒಂದೋ ಮಕ್ಕಳು ಓದುತ್ತಾ ಇರುತ್ತಾರೆ,ಇಲ್ಲದಿದ್ದರೆ ಹರಟೆ ಹೊಡೆದುಕೊಂಡು ಇರುತ್ತಾರೆ. ಅದರ ಜೊ

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

Image
  ನನ್ನ ನೆಚ್ಚಿನ ಗುರುವಿಗೆ ಹುಟ್ಟುಹಬ್ಬದ ಶುಭಾಶಯಗಳು! ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಚಿರಪರಿಚಿತರು, ಸಾವಿರಾರು ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರ(ರಾಷ್ಟ್ರಮಟ್ಟದ)ವರೆಗೆ ತರಬೇತಿ ನೀಡಿದ ಗುರುಗಳು, ಸಾಗರದ ಮಧ್ಯದಿ ಮುಳುಗುವ ಹಡಗಿನಂತಾಗಿದ್ದ ನನ್ನ ಸ್ಕೌಟ್ಸ್ ಪಯಣವನ್ನು ದಡ ಸೇರಿಸಿದ ಮಹಾನ್ ವ್ಯಕ್ತಿ ಇವರು. ಇವರು ಯಾರೆಂದರೆ ವಿದ್ಯಾರ್ಥಿಗಳ ನೆಚ್ಚಿನ "ಭರತ್ ಸರ್" ಭರತ್ ಸರ್ ಬಗ್ಗೆ ಪರಿಚಯ: ಇವರ ಪೂರ್ಣ ಹೆಸರು ಭರತ್ ರಾಜ್ ಕೆ. ಜುಲೈ 7, 1991ರಂದು ಗೋದಾವರಿ ಹಾಗು ಅಚ್ಯುತ ದಂಪತಿಯ ಎರಡನೇ ಪುತ್ರನಾಗಿ ಜನಿಸಿದರು. ಇವರು ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿರುವ 777 ಚಾರ್ಲಿ ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಇವರ ಪ್ರೀತಿಯ ತಮ್ಮ. ಬಾಲ್ಯದಲ್ಲೇ ಆರ್ಥಿಕ ಸಮಸ್ಯೆಗಳ ನಡುವೆ ವಿದ್ಯಾಭ್ಯಾಸವನ್ನು ಪಡೆದ ಇವರು ಪಾತಿಮಾ ALP ಹಿರಿಯ ಪ್ರಾಥಮಿಕ ಶಾಲೆ ನಾರಂಪಾಡಿ ಹಾಗೂ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ ಮಾನ್ಯದಲ್ಲಿ ಪ್ರೈಮರಿ ಶಿಕ್ಷಣವನ್ನು ಮುಗಿಸಿ, ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಬಳಿಕ ಜನತಾ ಪದವಿ ಪೂರ್ವ ಕಾಲೇಜು ಅಡ್ಯನಡ್ಕದಲ್ಲಿ ಕಲಾವಿಭಾಗದಲ್ಲಿ ಶಿಕ್ಷಣ ಪಡೆದು, ಡಿ. ಎಡ್. ತರಬೇತಿಯನ್ನು ಸೈಯದ್ ಮದನಿ ಉಳ್ಳಾಲ ಮಂಗಳೂರಿನಲ್ಲಿ ಪೂರೈಸಿದರು. ನಂತರ 5 ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದಲ್ಲಿರುವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶ