Posts

Showing posts from November, 2023

ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! | ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ!

Image
ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ! ಶೇಷ ಪರ್ವತದ ಒಂದು ಶಿಖರ! Pc: Sudheesh Patwardhan   ಕುಮಾರ ಪರ್ವತ! ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು! ಅಷ್ಟೇ ಅಲ್ಲ! ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಜೊತೆಗೆ ಹಿಂಬದಿಯಲ್ಲಿ ಕಾಣಸಿಗುವ ಬೆಟ್ಟ ಯಾವುದು ಎಂದು ಕೇಳಿದ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು! ಹಾಗಾಗಿ ಸುಬ್ರಹ್ಮಣ್ಯಕ್ಕೆ ಬಂದು ಹೋದವರಿಗೆ ಕುಮಾರ ಪರ್ವತ ಚಿರಪರಿಚಿತ ಹೆಸರು. ಜೊತೆಗೆ ಚಾರಣಪ್ರಿಯರಿಗೆ ಅಂತು ಇದು ಸ್ವರ್ಗ!  ಕುಮಾರಧಾರದ ಕುಮಾರಧಾರ ನದಿಯ ಸೇತುವೆಯಿಂದ ಕಾಣುವ ಶೇಷ ಪರ್ವತದ ಒಂದು ಸುಂದರ ನೋಟ! Pc:Shreekara B ನಾನು ಮೊದಲೇ ಹೇಳಿದ ಹಾಗೆ ನನ್ನ ಊರು ಸುಳ್ಯ ತಾಲೂಕಿನ ಪಶ್ಚಿಮ ಘಟ್ಟದ ತಪ್ಪನಲ್ಲಿರುವ ಹರಿಹರಪಲ್ಲತ್ತಡ್ಕ ಗ್ರಾಮ! ಈ ಗ್ರಾಮದ ಎದುರೇ ಕಾಣುವುದು ಕುಮಾರ ಪರ್ವತದ ಒಂದು ಬದಿಯಲ್ಲಿರುವ ಶೇಷ ಪರ್ವತ! ಬಾಲ್ಯದಿಂದ ಈ ಪರ್ವತ ಸಾಲನ್ನು ನೋಡುತ್ತಾ ಬೆಳೆದ ನನಗೆ ಒಂದು ದಿನ ಕುತೂಹಲದಿಂದ ಅಪ್ಪನ ಬಳಿ ಆ ಪರ್ವತವನ್ನು ಹತ್ತಲು ಆಗುತ್ತದೆಯೇ ಎಂದು ಕೇಳಿದ್ದೆ. ಆಗ ಅಪ್ಪ "ನೀನು ದೊಡ್ಡವನಾದ ಮೇಲೆ ಕುಮಾರ ಪರ್ವತ ಹತ್ತು" ಎಂದು ಹೇಳಿದ್ದರು. ಪ್ರತಿ ಬಾರಿಯೂ ಸುಬ್ರಹ್ಮಣ್ಯಕ್ಕೆ ಅಥವ ಹರಿಹರಪಲ್ಲತ್ತಡ್ಕಕ್ಕೆ ಹೋದಾಗಲೆಲ್ಲ ಈ ಪರ್ವತ ಶ್ರೇಣಿಯನ್ನು ಕನಿಷ್ಠಪಕ್ಷ ಒಂದು ಬಾರಿಯಾದರೂ ಸರಿಯಾ

ಸಿನಿಮಾ ಅಂದ್ರೆ ಇದು ಮಾರ್ರೆ!

Image
ಸಿನಿಮಾ ಅಂದ್ರೆ ಇದು ಮಾರ್ರೆ! ಯಬ್ಬ! ಏನು ಹೇಳುವುದು,ಏನು ಬರೆಯುವುದು ಒಂದೂ ಗೊತ್ತಾಗುತ್ತಿಲ್ಲ! ಸೆಪ್ಟೆಂಬರ್ ಅಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಬಿಡುಗಡೆಗೊಂಡಾಗ ನೋಡಿ ನನ್ನ ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದಿದ್ದ ನನಗೆ ಸೈಡ್ ಬಿ ನೋಡಿ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ! ಸೈಡ್ ಬಿ ಸಿನಿಮಾ ಅಂತೂ ನೈಜ,ಮುಗ್ಧ ಪ್ರೇಮ ಕಥನವನ್ನು ಬಹಳ ಚೆನ್ನಾಗಿ ಹೇಳುತ್ತದೆ. ಸೈಡ್ ಎ ಅಲ್ಲಿ ಪ್ರಿಯಾ "ನನ್ನ ಸಮುದ್ರ ನೀನು" ಎಂದು ಮನುವಿಗೆ ಹೇಳಿದರೆ ಅರ್ಥಾತ್ "ಅವಳ ಸಮುದ್ರ ಅವನು" ಎಂದು ಸೈಡ್ ಎ ಹೇಳಿ ತೋರಿಸಿ ಕೊಟ್ಟರೆ ಅದರ ಉಲ್ಟಾ "ಅವನ ಸಮುದ್ರ ಅವಳು" ಎಂಬುದು ಸೈಡ್ ಬಿ ಅಲ್ಲಿ ನೋಡಬಹುದಾಗಿದೆ. ಮನುವಿನ ಒಂದು ಮುಖವನ್ನು ಸೈಡ್ ಎ ಅಲ್ಲಿ ನಾವು ನೋಡಿ ಆಗಿದೆ. ಅದೆ ಮನುವಿನ ಇನ್ನೊಂದು ಮುಖವನ್ನು ಸೈಡ್ ಬಿ ಸಿನಿಮಾದಲ್ಲಿ ಚೆನ್ನಾಗಿ ನೋಡಬಹುದಾಗಿದೆ. ಮನುವಿನ ಮನಸ್ಸಿನ ಭಾವನೆಗಳು,ಪ್ರಿಯಾಳನ್ನು ಕಾಣಬೇಕೆನ್ನುವ ಹಂಬಲ,ಸುರಭಿಯ ಮುಗ್ಧ ಪ್ರೀತಿ,ಪ್ರಕಾಶನ ಗೆಳೆತನ,ಸೋಮನ ಸೇಡು ತಿರುವಿಕೆ ಜೊತೆಗೆ ಮಧ್ಯದಲ್ಲಿ,ಅಲ್ಲಲ್ಲಿ ಸಿಗುವ ಹಾಸ್ಯ ಸಂಭಾಷಣೆ,ಊಹಿಸಲು ಅಸಾಧ್ಯವಾದ ಕ್ಲೈಮಾಕ್ಸ್ ನೋಡುವವರ ಏಕಾಗ್ರತೆಯನ್ನು ಸಿನಿಮಾದುದ್ದಕ್ಕೂ ಎಳೆದು ಇಟ್ಟಕೊಳ್ಳುತ್ತದೆ! ಸಿನಿಮಾ ಕಥೆಯು ಮನಸ್ಸಿನ ಆಳಕ್ಕೆ ಇಳಿದು ಸಿನಿಮಾದ ಕೊನೆಗೆ ಭಾವನೆಗಳಿಂದ ಕಣ್ಣಿನಲ್ಲಿ ನೀರು ಬರುತ್ತದೆ ಹಾಗು ಅದೇ ಭಾವನೆಗಳ ಜೊತೆಗೆ ನೀವು ಹೊರಗ

ರಾಮಕೃಷ್ಣ ಶಾಲೆ,ನನ್ನ ಶಾಲೆ...!

Image
 ರಾಮಕೃಷ್ಣ ಶಾಲೆ,ನನ್ನ ಶಾಲೆ...!   ಅದು ಪುತ್ತೂರಿನ ಹೃದಯ ಭಾಗದಲ್ಲಿರುವ ಎತ್ತರದ ಸ್ಥಳ. ಸುತ್ತಲೂ ನೋಡಿದರೂ ಕಾಣಸಿಗುವ ಗುಡ್ಡಗಾಡು,ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ. ಸದಾ ಬೀಸುತ್ತಿರುವ ತಂಗಾಳಿ. ಇಂತಹ ಸ್ಥಳ ಸಿಕ್ಕರೆ ವಿದ್ಯಾರ್ಜನೆ ಮಾಡುವುದೇ ಒಂದು ಆನಂದ ಅಲ್ಲವೇ!? ಪುತ್ತೂರಿನ ಇಂತಹ ಸ್ಥಳದಲ್ಲಿರುವುದೇ ನಮ್ಮ ಶ್ರೀ ರಾಮಕೃಷ್ಣ ಪ್ರೌಢ ಶಾಲೆ. ನನ್ನ ಸರ್ವತೋಮುಖ ಬೆಳವಣಿಗೆಗೆ,ನನ್ನ ಒಳಗೆ ಅಡಗಿದ್ದ ಪ್ರತಿಭೆಯನ್ನು ಹೊರತಂದು,ಬೆಳೆಸಿದ ಶಾಲೆ! ಶ್ರೀ ಶ್ರೀಧರ್ ರೈ ಸರ್,ಶ್ರೀ ಮನೋಹರ್ ರೈ ಸರ್,ಶ್ರೀಮತಿ ವಸಂತಿ ಮೇಡಂ,ಶ್ರೀಮತಿ ಮಾಲತಿ ಮೇಡಂ,ಶ್ರೀಮತಿ ರೂಪಕಲಾ ಮೇಡಂ,ವನಿತಾ ಕುಮಾರಿ ಮೇಡಂ ಅವರಂತಹ ಶ್ರೇಷ್ಠ ಗುರುಗಳು ಸೇವೆ ಸಲ್ಲಿಸಿದ ವಿದ್ಯಾ ದೇಗುಲವಿದು! ಅದೆಷ್ಟೋ ವಿದ್ಯಾರ್ಥಿಗಳನ್ನು ಬೇರೆ ಬೇರೆ ಸ್ಪರ್ಧೆಗಳಿಗೆ,ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ದು ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ ಹೆಮ್ಮೆಯ ಶಾಲೆ! ಶಾಲೆಯಲ್ಲಿ ಈಗ ವಾರ್ಷಿಕೋತ್ಸವ ಹಾಗು ಕನ್ನಡ ರಾಜ್ಯೋತ್ಸವದ ಸಂಭ್ರಮ! ಇದೇ ಸಂದರ್ಭದಲ್ಲಿ ನಾನು ಶಾಲೆಯಲ್ಲಿ ಕಳೆದ ಅದೆಷ್ಟೋ ಸುಂದರ ಕ್ಷಣಗಳು,ನೆನಪುಗಳನ್ನು ಮೆಲುಕು ಹಾಕಲು ಬಯಸುತ್ತೇನೆ. ಅದು 2016ನೇ ಇಸವಿ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದಿನ ಶಿಕ್ಷಣಕ್ಕೆಂದು ನನ್ನನ್ನು ಶ್ರೀ ರಾಮಕೃಷ್ಣ ಪ್ರೌಢ ಶಾಲೆಗೆ ದಾಖಲಿಸುವ ತೀರ್ಮಾನ ನನ್ನ ಅಪ್ಪ-ಅಮ್ಮ ತೆಗದುಕೊ