Posts

Showing posts from August, 2022

ಕಟೀಲು ಮೇಳದ ಆಟ, ಅದು ಕೇವಲ ಆಟವಲ್ಲ, ಅಭಿಮಾನಿಗಳಿಗೆ ಅದೊಂದು ಭಾವನೆ!

Image
ಕೆಲವು ದಿನಗಳ ಹಿಂದೆ ಕಟೀಲು ಮೇಳಗಳ ಯಕ್ಷಗಾನ ಪ್ರದರ್ಶನ ಇನ್ನು ಕಾಲಮಿತಿ ಎಂಬ ಸುದ್ದಿಯನ್ನು ಓದಿದೆ. ವೈಯಕ್ತಿಕವಾಗಿ ನನಗೆ ಈ ಸುದ್ದಿ ಕೇಳಿ ಬೇಸರವಾಯಿತು. ಆದರೆ ಕಾಲಕ್ಕೆ ತಕ್ಕ ಬದಲಾವಣೆಗಳು ಸಹಜ. ನನಗೆ ಯಾಕೆ ಸಂಪೂರ್ಣ ರಾತ್ರಿಯ ಯಕ್ಷಗಾನ ಬಯಲಾಟ ಇಷ್ಟವೆಂದು ಹೇಳಲು ಈ ಲೇಖನವೇ ಸಾಕು. ಈ ಲೇಖನ ನಾನು ಮೇ 22,2022ರಂದು ನನ್ನ ಫೇಸ್ಬುಕ್ ಪುಟದಲ್ಲಿ ಬರೆದ ಲೇಖನವಾಗಿದೆ. ಇಂದು ಈ ಬ್ಲೋಗರ್ ಜಾಲದಲ್ಲಿ ಹಂಚುತ್ತಿದ್ದೇನೆ. ಲೇಖನ: ಕಟೀಲು ಮೇಳದ ಆಟ, ಅದು ಕೇವಲ ಆಟವಲ್ಲ, ಅಭಿಮಾನಿಗಳಿಗೆ ಅದೊಂದು ಭಾವನೆ! ಹೌದು ಮಿತ್ರರೇ, 2022ನೇ ಇಸವಿ ಆರಂಭವಾದೊಡನೆ ನಾನು ಪ್ರತೀಕ್ಷಿಸುತ್ತಿದ್ದದ್ದು ಎರಡು ತಿಂಗಳುಗಳನ್ನು, ಅದು ಎಪ್ರಿಲ್ ಹಾಗು ಮೇ. ಎಪ್ರಿಲ್ ತಿಂಗಳಲ್ಲಿ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನ ಜಾತ್ರೆಯಾದರೆ, ಮೇ ತಿಂಗಳಲ್ಲಿ ಹಾರಾಡಿ ಕಟ್ಟೆಯಲ್ಲಿ ನರಸಿಂಹ ಭಟ್ ಅವರ(ಪ್ರೀತಿಯ ನರಸಿಂಹಜ್ಜ) ಕಟೀಲು ಮೇಳದ ಸೇವೆಯಾಟ! ಎಪ್ರಿಲ್ ತಿಂಗಳು ಮುಗಿಯುವಾಗ ಈ ಆಟಕ್ಕೆ ಇನ್ನೆಲ್ಲಿಲ್ಲದ ಕಾತುರ! ಈ ವರ್ಷ ನನಗೆ ಕಟೀಲು ಮೇಳದ ಹಲವು ಅಭಿಮಾನಿ ಬಂಧುಗಳನ್ನು ಪರಿಚಯವಿದ್ದ ಕಾರಣ ಅವರ ಈ ವರ್ಷದ ಆಟದ ಪ್ರಸಂಗ ಏನು ಇರಬಹುದು ಎಂಬ ಚರ್ಚೆ! ಈ ವರ್ಷ ಎಪ್ರಿಲ್ ತಿಂಗಳ ಕೊನೆಯಲ್ಲಿ ನನಗೆ ಪರೀಕ್ಷೆಯಿದ್ದರು ಸಹ ಕಟೀಲು ಮೇಳದ ಮೇ ತಿಂಗಳ ಸೇವೆಯಾಟದ ಪಟ್ಟಿಯ ನಿರೀಕ್ಷೆ, ಕಾರಣ ನರಸಿಂಹಜ್ಜನವರ ಆಟ ಯಾವಾಗ ಇರಬಹುದು ಎಂಬ ಕುತೂಹಲ! ಅಂತು ಇಂತು ಎ.30ರಂದು ಸೇವೆಯಾಟದ ಪಟ್ಟ

ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಗಳು!

Image
ಇಂದು ನಾವೆಲ್ಲರೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಮೊತ್ತಮೊದಲನೆಯದಾಗಿ ತಮ್ಮೆಲರಿಗೆ 76ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ನನ್ನ ಲೇಖನದಲ್ಲಿ ಸ್ವಾತಂತ್ರ್ಯೋತ್ಸವದ ದಿನದಂದು ನಾನು ಮೊದಲು ಕಲೆತ ಶಾಲೆ,ಕಾಲೇಜಿನಲ್ಲಿ ಕಳೆದ ಸುವರ್ಣ ಕ್ಷಣಗಳನ್ನು ನೆನಪು ಮಾಡಲು ಇಚ್ಛಿಸುತ್ತೇನೆ.  ಆಗಸ್ಟ್ ತಿಂಗಳು ಬಂತೆಂದರೆ ಸಾಕು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲೆ,ಕಾಲೇಜಿನಲ್ಲಿ ಸ್ಪರ್ಧೆಗಳು ಶುರುವಾಗಿ ಬಿಡುತ್ತಿತ್ತು. ಆ ಸ್ಪರ್ಧೆಗಳಲ್ಲಿ ಸೇರಲು ಸ್ಪರ್ಧೆ ಏರ್ಪಡುವ ಮಟ್ಟಿಗೆ ವಿದ್ಯಾರ್ಥಿಗಳಲ್ಲಿ ಉತ್ಸಾಹವಿರುತ್ತಿತ್ತು! ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಅಲ್ಲಿ ಸ್ವಾತಂತ್ರ್ಯೋತ್ಸವ ಬಂತೆಂದರೆ ಸಾಕು ಎಲ್ಲಾ ಮಕ್ಕಳಿಗೂ ಉತ್ಸಹ. ಪುತ್ತೂರಿನಲ್ಲಿ ದೇಶಭಕ್ತರನ್ನು ಸೃಷ್ಟಿಸುವ ಶಾಲೆಗಳಲ್ಲಿ ಈ ಶಾಲೆಯು ಒಂದು. ಯಾವಾಗಲು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು,ಅವರ ಹೆಸರು ಹಾಗು ದೇಶಕ್ಕಾಗಿ ದುಡಿದ ಮಹಾನ್ ಪುರುಷರ ಹೆಸರು,ಹಿಂದಿನ ಕಾಲದ ಋಷಿ,ಮುನಿಗಳ ಹೆಸರನ್ನು ಪ್ರತಿ ತರಗತಿಗೆ ಇಟ್ಟಿರುವುದನ್ನು ನೀವು ನೋಡಬಹುದು. ಸ್ವಾತಂತ್ರ್ಯೋತ್ಸವ ದಿನ,ಗಣರಾಜ್ಯೋತ್ಸವದ ದಿನ ಎಲ್ಲಾ ವಿದ್ಯಾರ್ಥಿಗಳ ಶಾಲೆಗೆ ಬರುವುದು ಕಡ್ಡಾಯವಾಗಿತ್ತು. ಆ ದಿನ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ದೇಶಕ್ಕಾಗಿ ದುಡಿದ ವೀರ ಸೈನಿಕರನ್ನು ಆತಿಥಿಗಳಾಗಿ ಕರೆಯುತ್ತಿದ್ದರು.

ರಾಕೆಟ್ರಿ-ದಿ ನಂಬಿ ಎಫೆಕ್ಟ್!

Image
  ರಾಕೆಟ್ರಿ-ದಿ ನಂಬಿ ಎಫೆಕ್ಟ್! ಇತ್ತೀಚಿಗೆ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ ಇದು! ಭಾರತ ಬಾಹ್ಯಾಕಾಶ ಮತ್ತು ಸಂಶೋಧನ ಸಂಸ್ಥೆ ಇಸ್ರೋನ ಆರಂಭಿಕ ದಿನಗಳಲ್ಲಿ ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಡಾ.ವಿಕ್ರಮ್ ಸಾರಾಭಾಯಿ,ಡಾ.ಸತೀಶ್ ಧವನ್,ಡಾ.ಉಡುಪಿ ರಾಮಚಂದ್ರ ರಾವ್,"ಭಾರತ ರತ್ನ"ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೊತೆ ಇಸ್ರೋವನ್ನ ಬೆಳೆಸಿದ ಶ್ರೇಷ್ಠ ವಿಜ್ಞಾನಿ "ಪದ್ಮಭೂಷಣ" ಡಾ. ನಂಬಿ ನಾರಾಯಣ್ ಅವರ ಜೀವನದ ಆಧರಿತ ಸಿನಿಮಾ ಇದು.  ಮೊತ್ತಮೊದಲು ನಂಬಿ ನಾರಾಯಣ್ ಅವರ ಬಳಿ ನಾನು ಕ್ಷಮೆ ಕೇಳುತ್ತೇನೆ. ಒಬ್ಬ ಅಪ್ಪಟ ದೇಶಭಕ್ತ,ದೇಶಕ್ಕಾಗಿ ದುಡಿಯುತ್ತಿದ್ದು ಮೋಸದಿಂದ,ಸುಮ್ಮನೆ ಎಷ್ಟೋ ದಿನಗಳ ಕಾಲ ಚಿತ್ರಹಿಂಸೆ,ಶಿಕ್ಷೆ ಅನುಭವಿಸಿದವರು ನಂಬಿ ನಾರಾಯಣ್. ನಾವೆಲ್ಲರೂ ಅವರ ಬಳಿ ಕ್ಷಮೆ ಕೇಳಬೇಕಿದೆ. ಜೊತೆಗೆ ಸಿನಿಮಾ ನಿರ್ಮಿಸಿದ ಶ್ರೀ ಆರ್.ಮಾಧವನ್ ಅವರಿಗೆ ಒಂದು ಸೆಲ್ಯೂಟ್ ಮಾಡಬೇಕಿದೆ. ನಂಬಿ ನಾರಾಯಣ್ ಅವರಂತಹ ಶ್ರೇಷ್ಠ ವಿಜ್ಞಾನಿಯ ಬಗ್ಗೆ ತಿಳಿದುಕೊಂಡಿರದ ಈಗಿನ ಯುವ ಜನತೆಗೆ ಹಾಗು ಅವರ ಬಗ್ಗೆ ಆದ ಅಪಪ್ರಚಾರವೇ ಸತ್ಯ ಎಂದು ತಿಳಿದುಕೊಂಡಿರುವ ಜನರಿಗೆ ಸತ್ಯ ತಿಳಿಸಿದ್ದು ಈ ಸಿನಿಮಾ.  ಸಿನಿಮಾ ಆರಂಭಗೊಳ್ಳುವಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಸಿನಿಮಾದ ಇಂಟ್ರೋ ಪದ್ಯ ಏನು ಇದೆಯೋ ಅದು ಆರಂಭಗೊಳ್ಳುವುದೇ "ಶ್ರೀ ವೆಂಕಟೇಶ್ವರ ಸುಪ್ರಭಾತ"ದಿಂದ! ಹೌದು, ಈಗಿನ ಹಿಂದು ದೇವರು,ಧರ್ಮವನ್ನ

My review on famous novel "Swami and Friends" written by "R.K Narayan"

Image
  Swami and Friends- R.K Narayan From many days I used to read Kannada books, now I started my new reading journey with the English novel written by my favourite English novelist R.K Narayan. The famous novel "Swami and Friends" is written by R.K Narayan which is the story of tumultuous friendship of a young boy Swaminathan and his four friends and a new boy Rajam. This novel relates to our childhood days,playing with friends,getting punished for doing mischievous things, studying for exams for few days, finishing exam before time and thinking of other friend's performance, waiting for results,enjoying vacation etc. If I say about story,the story begins with introduction of young boys Swami,Mani,Somu,Shankar and Samuel(who is also called Pea) who are attending Albert Mission School,Malgudi.They four are close friends. One day in school, a new boy Rajam arrives, who is the son of Deputy Police Superintendent. Mani, who is believed to be strongest of all hates him. Afte