Posts

Featured Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

Image
ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ.  ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ.  ದೇವರ ಬ್ರಹ್ಮವಾಹಕರಾಗಿ ಇವ...

A Gem Hidden in the Foothills of Netravati Peak: The Bolle Falls Trek Experience!

Image
  A Gem Hidden in the Foothills of Netravati Peak: The Bolle Falls Trek Experience!   Sunday! Everyone harbours the thought of taking a brief respite on the weekly holiday to find some peace after toiling for six days of the week! There is always a desire to spend time with family, either at home or by going out somewhere. On such an occasion, the journey undertaken was towards Bolle Falls! From Monday to Saturday, with no break, my job and other responsibilities had left my mind completely exhausted, quietly longing for a little peace. At such times, the first thing that comes to mind is Mother Nature . In our search for peace, we often run here and there, trying many things sometimes even reaching a point where we feel that falling into bad habits doesn’t matter anymore. But people must realize that Mother Nature herself provides everything we truly need. Anyway, whenever I felt this pull towards nature, I would either go to my native town  Hariharapallathadka located ...

ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಅಡಗಿರುವ ಮಾಣಿಕ್ಯ: ಬೊಳ್ಳೆ ಜಲಪಾತದ ಚಾರಣ ಅನುಭವ!

Image
    ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಅಡಗಿರುವ ಮಾಣಿಕ್ಯ: ಬೊಳ್ಳೆ ಜಲಪಾತದ ಚಾರಣ ಅನುಭವ!   ಆದಿತ್ಯವಾರ! ವಾರದ ಆರು ದಿನ ಕೆಲಸ ಮಾಡಿ ವಾರದ ರಜಾದಿನದಂದು ಸ್ವಲ್ಪ ಬಿಡುವು ಪಡೆದು ನೆಮ್ಮದಿ ಪಡೆಯಬೇಕೆಂಬ ಆಲೋಚನೆ ಎಲ್ಲರಿಗೆ ಇರುತ್ತದೆ! ತಮ್ಮ ಕುಟುಂಬದ ಜೊತೆಗೆ ಮನೆಯಲ್ಲಿ ಅಥವ ಹೊರಗೆ ಎಲ್ಲಿಗಾದರೂ ಹೋಗಿ ಸಮಯ ಕರೆಯಬೇಕೆಂಬ ಆಲೋಚನೆಗಳು ಇರುತ್ತದೆ. ಇಂತಹ ಸಮಯದಲ್ಲಿ ನನ್ನ ಪಯಣ ಸಾಗಿದ್ದು ಬೊಳ್ಳೆ ಜಲಪಾತದ ಕಡೆಗೆ! ಸೋಮವಾರದಿಂದ ಶನಿವಾರ ತನಕ ಬಿಡುವು ಇಲ್ಲದೆ ನನ್ನ ಉದ್ಯೋಗ, ಇತರೇ ಕೆಲಸಗಳನ್ನು ಮಾಡಿ ಬಸವಳಿದ್ದ ನನ್ನ ಮನಸ್ಸು ಸ್ವಲ್ಪ ನೆಮ್ಮದಿಗೆ ಕಾಯುತ್ತಿತ್ತು. ಇಂತಹ ಸಮಯದಲ್ಲಿ ಮೊದಲು ನೆನಪಾಗುವುದು ಪ್ರಕೃತಿ ಮಾತೆಯನ್ನು! ನಾವು ನೆಮ್ಮದಿಯನ್ನು ಹುಡುಕಿಕೊಂಡು ಏನೇನೋ ಮಾಡಲು ಹೊರಡುತ್ತೇವೆ. ಕೊನೆಗೆ ಅದು ದುಶ್ಚಟಕ್ಕೆ ಬಿದ್ದರೂ ತೊಂದರೆಯಿಲ್ಲ ಎನ್ನುವ ಮಟ್ಟಕ್ಕೆ! ಆದರೆ ಪ್ರಕೃತಿ ಮಾತೆಯೇ ಎಲ್ಲವನ್ನು ಒದಗಿಸುತ್ತಿರುವುದು ಮನುಷ್ಯರಿಗೆ ತಿಳಿದಿರಬೇಕಲ್ಲ! ಇರಲಿ,ಹೀಗೆ ಪ್ರಕೃತಿ ಮಾತೆಯನ್ನು ನೆನಪಾದಾಗ ಒಂದೋ ನನ್ನ ಊರಾದ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹರಿಹರಪಲ್ಲತ್ತಡ್ಕಕ್ಕೆ ಹೋಗಿ ಹಳ್ಳಿಯಲ್ಲಿ ಒಂದೆರಡು ದಿನಗಳನ್ನು ಕಳೆದೋ ಅಥವ ಅವಕಾಶ ಸಿಕ್ಕರೆ ವರ್ಷಕ್ಕೆ ಒಂದೆರಡು ಚಾರಣಕ್ಕೆ ಹೋಗಿ ಬರುತ್ತಿದ್ದೆ. ಇಂದು ಅಂತಹ ಒಂದು ಉತ್ತಮ ಅವಕಾಶ ನನ್ನ ಪಾಲಿಗೆ ಒದಗಿ ಬಂತು! ಬೊಳ್ಳೆ ಜಲಪಾತ ಇದು ಹೆಚ್ಚಿನ ಜನರಿಗೆ ಅಪರಿಚಿತ ಸ್...

Kumara Parvatha: A Trekker’s Paradise – An Unforgettable Union of Devotion and Adventure

Image
Kumara Parvatha: A Trekker’s Paradise – An Unforgettable Union of Devotion and Adventure Kumara Parvatha! This name is etched in the minds of the people of our Dakshina Kannada district! Not just that, when devotees visit Subramanya and ask about the mountain visible behind the temple, they are immediately told it is Kumara Parvatha (though, in reality, what is visible is Shesha Parvatha). Thus, for anyone who has visited Subramanya, the name Kumara Parvatha is very familiar. For trekking enthusiasts, however, this is paradise! It is a peak that attracts trekkers back to its fold, no matter how many times they have conquered it. As beautiful as it looks, the trek is equally challenging! Two years ago, I trekked to Kumara Parvatha from the Subramanya side. Since then, due to changed regulations, the Kumara Parvatha trek has been restricted to a single day. Even if one goes from the Subramanya side, one must ascend and descend Kumara Parvatha within a single day. Staying overnight at ...

ಚಾರಣಿಗರ ಸ್ವರ್ಗ ಕುಮಾರ ಪರ್ವತ: ಭಕ್ತಿ ಮತ್ತು ಸಾಹಸದ ಅವಿಸ್ಮರಣೀಯ ಸಂಗಮ

Image
  ಚಾರಣಿಗರ ಸ್ವರ್ಗ ಕುಮಾರ ಪರ್ವತ: ಭಕ್ತಿ ಮತ್ತು ಸಾಹಸದ ಅವಿಸ್ಮರಣೀಯ ಸಂಗಮ ಕುಮಾರ ಪರ್ವತ! ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು! ಅಷ್ಟೇ ಅಲ್ಲ! ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಜೊತೆಗೆ ಹಿಂಬದಿಯಲ್ಲಿ ಕಾಣಸಿಗುವ ಬೆಟ್ಟ ಯಾವುದು ಎಂದು ಕೇಳಿದ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು! ಹಾಗಾಗಿ ಸುಬ್ರಹ್ಮಣ್ಯಕ್ಕೆ ಬಂದು ಹೋದವರಿಗೆ ಕುಮಾರ ಪರ್ವತ ಚಿರಪರಿಚಿತ ಹೆಸರು. ಜೊತೆಗೆ ಚಾರಣಪ್ರಿಯರಿಗೆ ಅಂತು ಇದು ಸ್ವರ್ಗ! ಎಷ್ಟು ಸಲ ಚಾರಣ ಮಾಡಿದರೂ ಮತ್ತೆ ಮತ್ತೆ ತನ್ನ ಹತ್ತಿರ ಚಾರಣ ಪ್ರಿಯರನ್ನು ಸೆಳೆಯುವ ಶಿಖರವಿದು! ನೋಡಲು ಎಷ್ಟು ಸುಂದರವೋ ಅಷ್ಟೇ ಕಠಿಣವಿರುವ ಚಾರಣವಿದು!   ಎರಡು ವರ್ಷಗಳ ಮೊದಲು ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಮಾಡಿದ್ದೆ. ಆ ಬಳಿಕ ಬದಲಾದ ನಿಯಮಗಳಿಂದಾಗಿ ಕುಮಾರ ಪರ್ವತ ಚಾರಣವೂ ಕೇವಲ ಒಂದೇ ದಿನಕ್ಕೆ ಸೀಮಿತಗೊಂಡಿತು. ಸುಬ್ರಹ್ಮಣ್ಯ ಭಾಗದಿಂದ ಹೋಗುವುದಾದರೂ ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲೇ ಬೇಕು. ಗಿರಿಗದ್ದೆಯಲ್ಲಿ ಭಟ್ಟರಮನೆ ಅಥವ ಅರಣ್ಯ ಇಲಾಖೆಯ ಚೆಕ್ ಪೋಸ್ಟಿನಲ್ಲಿ ರಾತ್ರಿಯ ವೇಳೆ ತಂಗುವ ಹಾಗಿಲ್ಲ. ಈ ನಿಯಮದಿಂದಾಗಿ ಸುಬ್ರಹ್ಮಣ್ಯ ಭಾಗದಿಂದ ಹತ್ತಿ ಇಳಿಯುವುದು ಇನ್ನಷ್ಟು ಕಠಿಣಗೊಂಡಿದೆ.   ಈ ಕುಮಾರ ಪರ್ವತ ಚಾರಣವಿದೆಯಲ್ಲ, ಇದು ಸಾಮಾನ್ಯ ಚಾರಣವಲ್ಲ! ಯಾವುದೇ ಮೋಜು ಮಸ್ತಿ ಮಾಡಲು ಚಾರಣ ಮಾಡುತ...