Posts

Featured Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

Image
ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ.  ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ.  ದೇವರ ಬ್ರಹ್ಮವಾಹಕರಾಗಿ ಇವ...

“How is the movie Kantara? – My Opinion!”

Image
“How is the movie Kantara? – My Opinion!” The movie Kantara , released in 2022, created history. Rishab Shetty introduced the glory of our Tulu Nadu’s deities to the world. It became a record-breaking success. When Kantara: Chapter 1 was announced, expectations of the people who were still in the mood of the first film rose sky high. After watching the film, I felt that Rishab Shetty has worked hard not to disappoint those expectations. When I watched the first film, there was suspense and curiosity right from the beginning till the end and many scenes beautifully portrayed the natural lifestyle and dialogues of a village. That’s what touched the hearts of people. In the earlier movie, there was more naturality and rawness in every frame , whereas in this film you can clearly notice that VFX and larger cinematic effects have been used to a greater extent to match the scale of the story and the expectations. Since the new film carried much higher expectations, it is clear that it wa...

"ಕಾಂತಾರ" ಸಿನಿಮಾ ಹೇಗಿದೆ!? ನನ್ನದೊಂದು ಅಭಿಪ್ರಾಯ!

Image
 "ಕಾಂತಾರ" ಸಿನಿಮಾ ಹೇಗಿದೆ!? ನನ್ನದೊಂದು ಅಭಿಪ್ರಾಯ! 2022ರಲ್ಲಿ ಬಿಡುಗಡೆಗೊಂಡ ಕಾಂತಾರ ಸಿನಿಮಾ ಒಂದು ದಾಖಲೆ ಸೃಷ್ಟಿಸಿತ್ತು. ನಮ್ಮ ತುಳುನಾಡಿನ ದೈವಗಳ ಮಹಿಮೆಯನ್ನು ರಿಷಭ್ ಶೆಟ್ರು ವಿಶ್ವಕ್ಕೆ ಪರಿಚಯಿಸಿದ್ದರು. ಇದು ದಾಖಲೆಯನ್ನೇ ಸೃಷ್ಟಿಸಿತು. ಇದೇ ಮೂಡಿನಲ್ಲಿದ್ದ ಜನರಿಗೆ ಯಾವಾಗ ಕಾಂತಾರ ಚಾಪ್ಟರ್-1 ಸಿನಿಮಾ ಘೋಷಣೆ ಆಯಿತೋ ಆಗ ಜನರ ನಿರೀಕ್ಷೆ ಉತ್ತುಂಗಕ್ಕೆ ಏರಿತು. ನನಗೆ ಚಿತ್ರ ನೋಡಿದ ಬಳಿಕ ಅನಿಸಿದ್ದು ಈ ನಿರೀಕ್ಷೆಯನ್ನು ಹಾಳುಮಾಡದೆ ಇರಲು ರಿಷಭ್ ಶೆಟ್ರು ಹೆಚ್ಚು ಶ್ರಮವಹಿಸಿದ್ದಾರೆ ಎಂದು.  ಮೊದಲ ಸಿನಿಮಾ ನೋಡಿದಾಗ ಅದರಲ್ಲಿ ಆರಂಭದಿಂದ ಅಂತ್ಯದ ತನಕ ಬಹಳಷ್ಟು ಕುತೂಹಲವಿತ್ತು ಹಾಗೂ ಹೆಚ್ಚಿನ ದೃಶ್ಯಗಳು ನೈಸರ್ಗಿಕವಾಗಿ ಒಂದು ಹಳ್ಳಿಯ ಜೀವನ ಶೈಲಿ,ಸಂಭಾಷಣೆಗಳನ್ನು ತೋರಿಸಿದ್ದರು. ಅದು ಹೆಚ್ಚಿನ ಜನರ ಮನಮುಟ್ಟುವಂತೆ ಇತ್ತು. ಈ ಸಿನಿಮಾಗೆ ಹೆಚ್ಚು ನಿರೀಕ್ಷೆಯಿದ್ದ ಕಾರಣ ಅದನ್ನು ತಲುಪಲು ದೊಡ್ಡ ಬಜೆಟಿನಲ್ಲಿ ಮಾಡಿದ್ದು ಸರಿಯಾಗಿ ಕಾಣುತ್ತದೆ. ಜೊತೆಗೆ ಮೂವಿಯ ಸೆಟ್ ಅದ್ಭುತವಾಗಿ ನಿರ್ಮಿಸಿದ್ದಾರೆ. ಆರಂಭದಲ್ಲಿ ಸಿನಿಮಾ ನೋಡುತ್ತಾ ಹೋದಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಹಾಕಿರುವ ಶ್ರಮ ಕಾಣುತ್ತದೆ. ಆದರೆ ನನಗೆ ಈ ಬಾರಿ ಅಷ್ಟು ಕುತೂಹಲ ಆಗಲಿಲ್ಲ. ಕಥೆಯಲ್ಲಿ ಒಂದು ಪಾತ್ರದ ಬಗ್ಗೆ ನಾವು ಒಂದು ರೀತಿಯಲ್ಲಿ ಯೋಚಿಸಿ ಆ ಪಾತ್ರ ಹೀಗೆ ಇರುತ್ತದೆ ಎಂಬ ತೀರ್ಮಾನಕ್ಕೆ ಬಂದರೆ ಅದು ಉಲ್ಟಾ ಆಗುವ ಸಾಧ್ಯತೆ ...

ಪುತ್ತೂರೂ-ಮಂಗಳೂರು ನಡುವೆ ಮಧ್ಯಾಹ್ನದ ವೇಳೆ ಇಲ್ಲ ರೈಲು ಸಂಪರ್ಕ! ಕೇಳಿ ಬಂತು ಮಡಗಾಂವ್-ಮಂಗಳೂರು ಮೆಮು ರೈಲಿನ ಪುತ್ತೂರು ತನಕ ವಿಸ್ತರಣೆಯ ಕೂಗು!

Image
 ಪುತ್ತೂರೂ-ಮಂಗಳೂರು ನಡುವೆ ಮಧ್ಯಾಹ್ನದ ವೇಳೆ ಇಲ್ಲ ರೈಲು ಸಂಪರ್ಕ! ಕೇಳಿ ಬಂತು ಮಡಗಾಂವ್-ಮಂಗಳೂರು ಮೆಮು ರೈಲಿನ ಪುತ್ತೂರು ತನಕ ವಿಸ್ತರಣೆಯ ಕೂಗು! ಚಿತ್ರ ಕೃಪೆ: ದಿ ಹಿಂದು ಪತ್ರಿಕೆ ಮಂಗಳೂರು,ಪುತ್ತೂರು ಇವು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಮುಖ ನಗರಗಳು. ವಿವಿಧ ಕೆಲಸಗಳಿಗೆ, ವಿದ್ಯಾಭ್ಯಾಸಕ್ಕೆ, ಪ್ರವಾಸಕ್ಕೆ ಸೇರಿ ಪ್ರತಿದಿನ ಸಾವಿರಾರು ಜನರು ಈ ಎರಡು ನಗರಗಳ ನಡುವೆ ಸಂಚರಿಸುತ್ತಾರೆ. ಜೊತೆಗೆ ಈ ಎರಡು ನಗರಗಳಲ್ಲಿರುವ ರೈಲು ನಿಲ್ದಾಣಗಳು(ಮಂಗಳೂರು ಸೆಂಟ್ರಲ್,ಮಂಗಳೂರು ಜಂಕ್ಷನ್, ಕಬಕ ಪುತ್ತೂರು) ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳು ಹೌದು ಹಾಗು ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವ ರೈಲು ನಿಲ್ದಾಣಗಳೂ ಹೌದು. ಹೀಗೆ ಹಲವಾರು ಮಹತ್ವಗಳನ್ನು ಪಡೆದಿರುವ ಈ ಎರಡು ನಗರಗಳ ನಡುವೆ ಸಾರಿಗೆ ಸೇವೆ ಅತಿ ಮುಖ್ಯ. ಸದ್ಯ ಪುತ್ತೂರು-ಮಂಗಳೂರು ನಡುವೆ ಸಾಕಷ್ಟು ಸರ್ಕಾರಿ,ಖಾಸಗಿ ಬಸ್ ಸೇವೆಗಳೂ ಇದ್ದರೂ ಕೆಲವೊಮ್ಮೆ ವಿವಿಧ ಕಾರಣಗಳಿಂದ ಬಸ್ ಸೇವೆಗಳಲ್ಲಿ ವ್ಯತ್ಯಯಗೊಂಡಾಗ ರೈಲು ಸೇವೆಗಳು ಮಹತ್ವ ಪಡೆಯುತ್ತದೆ. ಇನ್ನು ಸಾರಿಗೆಯಲ್ಲಿ ರೈಲು ಸೇವೆಯ ಬಗ್ಗೆ ಹೇಳುವುದಾದರೆ ಪುತ್ತೂರು-ಮಂಗಳೂರು ನಡುವೆ(ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್) ಸದ್ಯ ಪ್ರತಿದಿನ 6 ರೈಲುಗಳ ಸಂಚಾರವಿದೆ. ಇಷ್ಟು ಮಹತ್ವ ಪಡೆದಿರುವ ನಗರಗಳ ನಡುವೆ ಕೇವಲ 6 ರೈಲುಗಳು ಮಾತ್ರ ಓಡುತ್ತದೆ ಎಂದು ಕೇಳುವಾಗ ಆಶ್ಚರ್ಯ ಆಗಬಹುದು. ಈಗ ಇರುವ ಈ 6 ರೈಲುಗಳಲ್ಲಿಯೂ...

The World’s Highest Hikkim Post Office: The Fascinating Story of Rinchen, Serving the Himalayas for 42 Years

Image
The World’s Highest Hikkim Post Office: The Fascinating Story of Rinchen, Serving the Himalayas for 42 Years India Post! It is indeed the pride of our nation! A department that holds the record for the world’s largest postal network! One of the most efficient departments under the Government of India! There was a time when letters were the only means of sending messages across India. For centuries, even during the reign of kings, messages were carried through pigeons and royal messengers. In the modern era, during British rule, the postal department came into existence in India. Later, in independent India, the government expanded postal services to include not just letters but also financial services. This department has illuminated countless homes and families. Many eagerly awaited the postman, wondering when he would arrive with a letter. A single letter was enough to bring happiness to a household. Letters reached every corner, no matter how remote. Among the many proud institu...

ವಿಶ್ವದ ಅತ್ಯಂತ ಎತ್ತರದ ಹಿಕ್ಕಿಂ ಅಂಚೆ ಕಚೇರಿ: 42 ವರ್ಷಗಳಿಂದ ಹಿಮಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ರಿಂಚನ್ ಅವರ ರೋಚಕ ಕಥೆ!

Image
 ವಿಶ್ವದ ಅತ್ಯಂತ ಎತ್ತರದ ಹಿಕ್ಕಿಂ ಅಂಚೆ ಕಚೇರಿ: 42 ವರ್ಷಗಳಿಂದ ಹಿಮಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ರಿಂಚನ್ ಅವರ ರೋಚಕ ಕಥೆ! ಭಾರತೀಯ ಅಂಚೆ ಇಲಾಖೆ! ಇದು ನಮ್ಮ ಭಾರತದ ಹೆಮ್ಮೆಯು ಹೌದು! ವಿಶ್ವದ ಅತಿದೊಡ್ಡ ಅಂಚೆ ಜಾಲವನ್ನು ಹೊಂದಿರುವ ಇಲಾಖೆಯು ಹೌದು! ಭಾರತ ಸರ್ಕಾರದ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇಲಾಖೆಗಳಲ್ಲಿ ಇದು ಒಂದು!  ಅದೊಂದು ಕಾಲವಿತ್ತು. ಭಾರತದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರ ಸಂದೇಶ ರವಾನಿಸುವ ಕೆಲಸಗಳನ್ನು ಪತ್ರಗಳು ಮಾಡುತ್ತಿದ್ದವು. ಇದು ಎಷ್ಟೋ ಶತಮಾನಗಳ ಹಿಂದಿನಿಂದಲೂ ರಾಜರ ಕಾಲದಿಂದಲೂ ಪಾರಿವಳ,ರಾಜದೂತರ ಮೂಲಕವೂ ರವಾನಿಸುವ ಕೆಲಸಗಳು ಆಗುತ್ತಿತ್ತು. ಅದೇ ರೀತಿ ನಮ್ಮ ಆಧುನಿಕ ಯುಗದಲ್ಲಿ ಬ್ರಿಟಿಷರು ಭಾರತದಲ್ಲಿದ್ದ ಕಾಲದಿಂದ ಅಂಚೆ ಇಲಾಖೆಯು ಅಸ್ತಿತ್ವಕ್ಕೆ ಬಂದು ನಂತರ ಸ್ವತಂತ್ರ ಭಾರತದಲ್ಲಿ ಭಾರತ ಸರ್ಕಾರವೂ ಅಂಚೆ ಸೇವೆಗಳಿಗೆ ಸಂಬಂಧಿಸಿ ಅಂಚೆ ಇಲಾಖೆಯನ್ನು ಸ್ಥಾಪಿಸಿ ಅಂಚೆ ಸೇವೆ ಮಾತ್ರವಲ್ಲದೆ ಹಣಕಾಸಿಗೆ ಸಂಬಂಧಪಟ್ಟ ಸೇವೆಗಳನ್ನೂ ನೀಡಲು ಆರಂಭಿಸಿತು. ಎಷ್ಟೋ ಮನೆಗಳನ್ನು,ಕುಟುಂಬಗಳನ್ನು ಬೆಳಗುವ ಕೆಲಸ ಈ ಅಂಚೆ ಇಲಾಖೆ ಮಾಡಿದೆ. ಎಷ್ಟೋ ಜನರು ಯಾವಾಗ ಅಂಚೆಪೇದೆ(ಪೋಸ್ಟ್ ಮ್ಯಾನ್) ತಮ್ಮ ಸ್ಥಳಕ್ಕೆ ಬಂದು ಪತ್ರವನ್ನು ವಿತರಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇರುತ್ತಿದ್ದರು. ಒಂದು ಪತ್ರ ಒಂದು ಮನೆಯ ಸಂತೋಷಕ್ಕೆ ಕಾರಣ ಆಗುತ್ತಿತ್ತು. ಯಾವುದೇ ಮೂಲೆಗೂ ಪತ್ರಗಳು ತಲ...

"Su From So!" – A Movie That Has the Audience Suspended in Laughter! What Is This Film Like?

Image
 "Su From So!" – A Movie That Has the Audience Suspended in Laughter! What Is This Film Like? When one speaks of a film, it has to take the audience on a ride of rollercoasters. To engage them, a movie should have a powerful story and surprising turns. Coupled with that, funny moments and suspenseful scenes are what keep the viewer engaged and "Su From So!" possesses all these aspects! In a typical mass movie, we have a hero, a heroine and a villain. The hero battles the villain and with a single punch, the villain is sent flying a kilometer away or spins around in the air before landing. Then, eventually, there is a victory for the hero. For viewers who are fed up with such repetitive scenes, this movie presents something new and refreshing. Right from the start to the last shot, it is loaded with such laugh-out-loud moments, colloquies in our native Kannada particularly the Mangaluru ascent, the aroma of rural life and real performances. These elements have earned...

ವೀಕ್ಷಕರನ್ನು ನಗುವಿನಲ್ಲಿ ತೇಲಿಸಿ ಬಿಡುವ "ಸು ಫ್ರಮ್ ಸೋ!" ಸಿನಿಮಾ, ಹೇಗಿದೆ ಸಿನಿಮಾ!?

Image
 ವೀಕ್ಷಕರನ್ನು ನಗುವಿನಲ್ಲಿ ತೇಲಿಸಿ ಬಿಡುವ "ಸು ಫ್ರಮ್ ಸೋ!" ಸಿನಿಮಾ, ಹೇಗಿದೆ ಸಿನಿಮಾ!? ಒಂದು ಸಿನಿಮಾ ಎಂದಾಕ್ಷಣ ಅದರಲ್ಲಿ ರೋಲರ್ ಕೋಸ್ಟರ್ ರೈಡಿನ ಹಾಗೆ ಹೋಗಬೇಕಾದರೆ,ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದರೆ ಅದಕ್ಕೆ ಕಥೆ,ಅಲ್ಲಲ್ಲಿ ಸಿಗುವ ತಿರುವುಗಳು ಒಂದು ಪಾತ್ರವಹಿಸುತ್ತದೆ. ಜೊತೆಗೆ ಹಾಸ್ಯ ಸನ್ನಿವೇಶಗಳು,ಕುತೂಹಲಕಾರಿ ಸನ್ನಿವೇಶಗಳು ಕೂಡ ಪ್ರೇಕ್ಷಕರನ್ನು ಆ ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಎಲ್ಲಾ ಗುಣಗಳು ಇರುವಂತಹ ಸಿನಿಮಾವೇ "ಸು ಫ್ರಮ್ ಸೋ"! ಸಾಮಾನ್ಯವಾಗಿ ಒಂದು ಸಿನಿಮಾ ಎಂದಾಕ್ಷಣ ನಾವು ಹೆಚ್ಚಾಗಿ ನೋಡುವುದು ಒಂದು ಕಥೆಗೆ ನಾಯಕ,ನಾಯಕಿ ಇರುತ್ತಾರೆ ಹಾಗು ನಾಯಕ ಖಳನಾಯಕ ಜೊತೆಗೆ ಜಗಳ ಮಾಡುತ್ತಾನೆ,ಒಂದು ಸ್ಥಳದಲ್ಲಿ ನಿಂತು ಹೊಡೆದರೆ ಪೆಟ್ಟು ತಿಂದವ ಒಂದು ಕಿಲೋಮೀಟರ್ ದೂರಕ್ಕೆ ಹೋಗಿ ಬೀಳುತ್ತಾನೆ ಅಥವ ಅಲ್ಲೇ ನೆಲಕ್ಕೆ ಬಿದ್ದು ಕೆಲವು ಬಾರಿ ಪಲ್ಟಿ ಹೊಡೆಯುತ್ತಾನೆ ಹೀಗೆಲ್ಲ ನಾವು ನೋಡಿರುತ್ತೇವೆ. ಕೊನೆಗೆ ಆ ಸಿನಿಮಾದ ನಾಯಕ ಗೆಲ್ಲುತ್ತಾನೆ. ಇಂತಹ ಸನ್ನಿವೇಶಗಳನ್ನು ನೋಡಿ ರೋಸಿ ಹೋಗಿರುವ ಜನರಿಗೆ ಹೊಸತನವನ್ನು ನೀಡುವ ಸಿನಿಮಾವಿದು. ಆರಂಭದಿಂದ ಕೊನೆಯ ತನಕ ಹಾಸ್ಯಭರಿತ ಸನ್ನಿವೇಶ, ನಮ್ಮ ಊರಿನ ಕನ್ನಡ ಆಥವ ಮಂಗಳೂರು ಕನ್ನಡದಲ್ಲಿ ಸಂಭಾಷಣೆ,ಹಳ್ಳಿಯ ಸೊಗಡು,ನೈಜ ಅಭಿನಯ ಇಂತಹ ಗುಣಗಳು ಈ ಸಿನಿಮಾವನ್ನು ಗೆಲ್ಲಿಸಿದೆ. ಇನ್ನು ಕಥೆಯ ವಿಷಯಕ್ಕೆ ಬರುವಾದದರೆ ನಮ್ಮ ಹಳ್ಳಿಗಳಲ್ಲಿ ಇರ...

ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ!

Image
 ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ! ಅದು ದಿನಾಂಕ 24 ಎಪ್ರಿಲ್,1990. ನಮ್ಮ ಕರಾವಳಿಯಲ್ಲಿ ಬೇಸಗೆಯ ಕಾಲ. ಆ ದಿನ ದೇಶದ ರೈಲ್ವೆ ಇತಿಹಾಸದ ದಾಖಲೆ ಪುಟಗಳಲ್ಲಿ ಸೇರಿದ ದಿನ. ಅಂದುಮಂಗಳೂರಿನಿಂದ ಜಮ್ಮು ತಾವಿ ತನಕ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾವಿರಾರು ಜನರನ್ನು ಹೊತ್ತುಕೊಂಡು ಹೋದ ರೈಲೊಂದು ಆರಂಭಗೊಂಡಿತು. ಅಷ್ಟು ಮಾತ್ರವಲ್ಲದೆ ದೇಶದ ನಾಲ್ಕನೆಯ ಉದ್ದದ ರೈಲು ಎಂಬ ಕೀರ್ತಿಯನ್ನು ಪಡೆಯಿತು. ಭಾರತೀಯ ರೈಲ್ವೆ ಜಾಲದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿತು. ಇದು ಬೇರೆ ಯಾವ ರೈಲು ಅಲ್ಲ ಇದುವೇ ಹೊಸ ಯುಗಕ್ಕೆ ನಾಂದಿ ಹಾಡಿದ ನಮ್ಮ ಹೆಮ್ಮೆಯ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರ "ನವಯುಗ ಎಕ್ಸ್‌ಪ್ರೆಸ್" ರೈಲು. ಸೋಮವಾರ ಬಂತೆಂದರೆ ಸಂಜೆ ಸೂರ್ಯ ಕಡಲಿನಲ್ಲಿ ಅಸ್ತಮಗೊಳ್ಳುವ ಸಮಯಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಒಂದು ರೈಲಿನ ಉಗಿಬಂಡಿಯ ಅಬ್ಬರದ ಸದ್ದು ಕೇಳುತ್ತಿತ್ತು. ತಾನು ಹೋಗಿ ಬರುತ್ತೇನೆ, ಎಷ್ಟೋ ಜನರನ್ನು ತನ್ನೊಡಲಿನಲ್ಲಿ ಕುಳ್ಳಿರಿಸಿ ಸುರಕ್ಷಿತವಾಗಿ ಅವರ ಸ್ಥಾನಕ್ಕೆ ಬಿಟ್ಟು ಮರಳಿ ಬರುವಾಗ ಮತ್ತೆ ಸಾವಿರಾರು ಜನರನ್ನು ಕರೆದುಕೊಂಡು ಬರುತ್ತೇನೆ ಎನ್ನುತ್ತಾ ಮಂಗಳೂರು ಸೆಂಟ್ರಲಿನಿಂದ ಸಂಜೆ 5 ಗಂಟೆಗೆ ಹೊರಡುತ್ತಿದ್ದ ಈ ರೈಲು ಮಂಗಳೂರಿನಿಂ...

ವೀರ ಚಂದ್ರಹಾಸ! ದೊಡ್ಡಪರದೆಯಲ್ಲಿ ಕರಾವಳಿಯ ಗಂಡುಕಲೆಯ ಅಬ್ಬರ! ಹೇಗಿದೆ ಈ ಸಿನಿಮಾ!?

Image
ವೀರ ಚಂದ್ರಹಾಸ! ದೊಡ್ಡಪರದೆಯಲ್ಲಿ ಕರಾವಳಿಯ ಗಂಡುಕಲೆಯ ಅಬ್ಬರ! ಹೇಗಿದೆ ಈ ಸಿನಿಮಾ!?    ಈಗಷ್ಟೆ ವೀರ ಚಂದ್ರಹಾಸ ಸಿನಿಮಾವನ್ನು ಅಮೆಜಾನ್ ಪ್ರೈಮಿನಲ್ಲಿ ನೋಡಿದೆ. ಈ ಸಿನಿಮಾ ಬಗ್ಗೆ ನಾನು ಬಿಡುಗಡೆಗೊಳ್ಳುವ ಸಮಯದಲ್ಲಿ ತಿಳಿದಿದ್ದರೂ ಕಾರಣಾಂತರಗಳಿಂದ ಚಿತ್ರಮಂದಿರಕ್ಕೆ ಹೋಗಿ ನೋಡಲು ಆಗರಿಲಿಲ್ಲ. ನಂತರ ಅಮೆಜಾನ್ ಪ್ರೈಮಿನಲ್ಲಿ ಬಿಡುಗಡೆಗೊಂಡ ಬಗ್ಗೆ ನನಗೆ ಗೊತ್ತಿರಲಿಲ್ಲ. ಇಂದು ಇನ್ಟಾಗ್ರಾಮಿನಲ್ಲಿ ರೀಲ್ಸ್ ನೋಡುತ್ತಿದ್ದಾಗ ಈ ಚಿತ್ರದ ಒಂದು ತುಣುಕನ್ನು ನಾನು ನೋಡಿದೆ. ಮದನ ರಾಜ್ಯವನ್ನು ಆಳುವ ಸನ್ನಿವೇಶ ಅದು. ಕಡಬಾಳರ ಅಭಿನಯ. ತಕ್ಷಣ ನಾನು ಗೂಗಲಿನಲ್ಲಿ ಚಿತ್ರದ ಬಗ್ಗೆ ಹುಡುಕಿದೆ. ಅಮೆಜಾನ್ ಪ್ರೈಮಿನಲ್ಲಿ ಇರುವುದು ಗೊತ್ತಾಯಿತು. ಕೂಡಲೆ ಪ್ರೈಮಿಗೆ ಹೋಗಿ ಸಿನಿಮಾ ನೋಡಲು ಕೂತ ನಾನು ಈಗ ನೋಡಿ ಮುಗಿಸಿದೆ. ಯಕ್ಷಗಾನವನ್ನು ಸಿನಿಮಾದಲ್ಲಿ ನೋಡುವ ಒಂದು ಖುಷಿಯೇ ಬೇರೆ! ಕಥೆಯ ಬಗ್ಗೆ ಹೇಳುವುದಾದರೆ ಇದು ನಮಗೆ ಯಕ್ಷಗಾನದಲ್ಲಿರುವ ಚಂದ್ರಹಾಸ ಚರಿತ್ರೆ ಪ್ರಸಂಗವನ್ನು ಸಿನಿಮಾದಲ್ಲಿ ಯಕ್ಷಗಾನ ಶೈಲಿಯಲ್ಲಿ ತೋರಿಸಿದ್ದಾರೆ. ಆದರೆ ನಾನು ಈ ಹಿಂದೆ ಯಕ್ಷಗಾನ ಬಯಲಾಟದಲ್ಲಿ ನೋಡಿದಾಗ ಚಂದ್ರಹಾಸನ ಪೂರ್ವ ಇತಿಹಾಸ ಅಂದರೆ ಬಾಲಕನಾಗಿದ್ದಾಗ ಇದ್ದ ರೀತಿಯ ಬಗ್ಗೆ ನಾನು ತಿಳಿದಿರಲಿಲ್ಲ. ಇದು ಈ ಸಿನಿಮಾದ ಮೂಲಕ ನಾನು ತಿಳಿದುಕೊಂಡೆ. ಇದರ ಜೊತೆಗೆ ಶಿವ ಪುಟ್ಟಸ್ವಾಮಿಯ ಬಗ್ಗೆಯೂ ತಿಳಿದುಕೊಂಡದ್ದು ಸಿನಿಮಾದಲ್ಲಿಯೇ. ಇನ್ನು ರವಿ ಬಸ್ರೂರು ...

ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ...!

Image
 ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ...! ಸದಾ ಪೇಟೆಯ ಜಂಜಾಟದ ಮಧ್ಯೆ ಬದುಕುವಾಗ ಅದರಿಂದ ಮುಕ್ತಿ ಪಡೆಯಲು ಸ್ವಲ್ಪ ಸಮಯ ಪ್ರಕೃತಿಯ ಮಧ್ಯೆ ಕಳೆಯಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದೇ ಆಸೆಯೊಂದಿಗೆ ಗೆಳೆಯರೊಂದಿಗೆ ವರ್ಷದಲ್ಲಿ ಒಂದೆರಡು ಬಾರಿ ಪ್ರವಾಸ,ಚಾರಣಕ್ಕೆ ಹೋಗುವ ನಾನು ಈ ಮೊದಲು ಕುಮಾರ ಪರ್ವತ,ಕುದುರೆಮುಖ ಶಿಖರಗಳ ಚಾರಣ ಮಾಡಿದ್ದೆ. ಕುದುರೆಮುಖ ಶಿಖರದ ಚಾರಣಕ್ಕೆ ಹೋಗುವ ಮೊದಲು ನನಗೆ ಇದರ ಯೋಜನೆ ರೂಪಿಸುವ ಸಮಯದಲ್ಲಿ ನಾನು ಮೊದಲು ಹೋಗಲು ತೀರ್ಮಾನಿಸಿದ್ದು ನೇತ್ರಾವತಿ ಶಿಖರಕ್ಕೆ ಚಾರಣ ಎಂದು. ಆದರೆ ನಂತರ ನಮ್ಮ ಯೋಜನೆಯಲ್ಲಿ ಬದಲಾವಣೆ ತಂದು ಕುದುರೆಮುಖ ಶಿಖರಕ್ಕೆ ಚಾರಣ ಹೋದೆವು. ಈ ಬಾರಿ ಅನಿರೀಕ್ಷಿತವಾಗಿ ಒಂದು ಯೋಜನೆ ಮಾಡಿ ಎರಡು ದಿನಗಳ ಪ್ರವಾಸ ಆಯೋಜಿಸಿ ಮೊದಲ ದಿನ ಚಾರ್ಮಾಡಿ,ದೇವರಮನೆ,ರಾಣಿಝರಿ,ಕಳಸಕ್ಕೆ ಭೇಟಿ ನೀಡಿ ಎರಡನೆಯ ದಿನ ನೇತ್ರಾವತಿ ಶಿಖರಕ್ಕೆ ಚಾರಣ ಹೋದೆವು. ಈ ಲೇಖನದಲ್ಲಿ ಮೊದಲ ದಿನದ ಅನುಭವಕ್ಕಿಂತ ಮುಖ್ಯವಾಗಿ ನಾನು ನೇತ್ರಾವತಿ ಶಿಖರದ ಚಾರಣ ಮಾಹಿತಿ,ಅನುಭವದ ಬಗ್ಗೆ ಮಾಹಿತಿ ನೀಡುತ್ತೇನೆ. ನೇತ್ರಾವತಿ ಶಿಖರ ಕರ್ನಾಟಕದ ಸುಂದರ ಶಿಖರಗಳಲ್ಲಿ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ಉಗಮ ಸ್ಥಾನವು ಇಲ್ಲಿ ಹತ್ತಿರದಲ್ಲಿದೆ. ಹೀಗಾಗಿ ಈ ಶಿಖರಕ್ಕೆ ನೇತ್ರಾವತಿಯ ಹೆಸರು ಬಂತು. ಸಮುದ್ರ ಮಟ್ಟದಿಂದ 1520 ಮೀಟರ್ ಎತ್ತರದಲ್ಲಿರುವ ಈ ಶಿಖರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒ...