Posts
Showing posts from June, 2023
"ಹರಿಹರ"ರು ನೆಲೆ ನಿಂತ ಊರು ಪಲ್ಲತ್ತಡ್ಕ!
- Get link
- Other Apps
"ಹರಿಹರ"ರು ನೆಲೆ ನಿಂತ ಊರು ಪಲ್ಲತ್ತಡ್ಕ! ಹಲವು ಸಮಯದಿಂದ ನನ್ನ ಊರು ಹರಿಹರಪಲ್ಲತ್ತಡ್ಕದಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾ ನ ದ ಬಗ್ಗೆ ಒಂದಲ್ಲ ಒಂದು ಪೋಸ್ಟ್ ಬರೆಯುತ್ತಲೆ ಇದ್ದೆ. ಆದರೆ ಒಮ್ಮೆಯೂ ಶ್ರೀ ಕ್ಷೇತ್ರದ ಪರಿಚಯ ನಾನು ಮಾಡಿರಲಿಲ್ಲ. ಇಂದು ಏಕೋ ನಿಮಗೆ ನನ್ನ ಊರಿನ ಪವಿತ್ರ,ಕಾರಣಿಕ ಹರಿಹರೇಶ್ವರ ದೇವರ ಕ್ಷೇತ್ರದ ಪರಿಚಯ ಮಾಡುವ ಆಸೆ ನನಗೆ ವ್ಯಕ್ತವಾಯಿತು. ಹಾಗಾಗಿ ಈ ಲೇಖನ ಬರೆಯುತ್ತಿದ್ದೇನೆ. Image source: Google ಶ್ರೀ ಹರಿಹರೇಶ್ವರ ದೇವಸ್ಥಾನ ದಕ್ಷಿಣ ಭಾರತದ ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಪಶ್ಚಿಮ ಘಟ್ಟದ ತಪ್ಪನಲ್ಲಿರುವ ಒಂದು ಪುಣ್ಯ ತ್ರಿವೇಣಿ ಸಂಗಮ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ತಾಲೂಕು ಸುಳ್ಯ ಈ ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕ ಎಂಬ ಒಂದು ಹಳ್ಳಿಯಲ್ಲಿ ಶ್ರೀ ಹರಿಹರೇಶ್ವರ ದೇವರು ನೆಲೆಸಿದ್ದಾರೆ. ಇತಿಹಾಸ/ಸ್ಥಳ ಪುರಾಣ: ಇತಿಹಾಸದ ಪ್ರಕಾರ ಸಾವಿರಾರು ವರ್ಷಗಳ ಮೊದಲು ಒರ್ವ ಋಷಿಗಳು ತಮ್ಮ ಸಂಚಾರದ ಸಮಯದಲ್ಲಿ ಪಲ್ಲತ್ತಡ್ಕ ಎಂಬ ಊರಿಗೆ ಬಂದಾಗ ಅಲ್ಲಿ ಮೂರು ನದಿಗಳು ಸಂಗಮ ಆಗುವ ಸ್ಥಳವನ್ನು ಕಂಡು ಸಂತೋಷಗೊಂಡು ಅಲ್ಲಿ ಹರಿಹರೇಶ್ವರ ದೇವರನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿದರು ಎಂಬ ನಂಬಿಕೆಯಿದೆ. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಜಾಲತಾಣದಲ್ಲಿ ನೀಡಿದ ವಿವರಾನುಸಾರ ದೇವಾಲಯದ ಪೂರ್ವದಿಕ್ಕಿನಲ್ಲಿರುವ ಸುಮಾರು ಐದು ಸಾವಿರ ವರುಷಗಳಿಗೂ ಹಿ
ಪೋಸ್ಟ್ ಐಪಿಎಲ್ ಮಾತುಕತೆ!
- Get link
- Other Apps
ಪೋಸ್ಟ್ ಐಪಿಎಲ್ ಮಾತುಕತೆ! 2023ನೇ ಸಾಲಿನ ಐಪಿಎಲ್ ಮುಗಿಯಿತು,ನೆಚ್ಚಿನ ಚೆನ್ನೈ ಗೆದ್ದಾಯಿತು, ಆದರೆ ಕೆಲವು ವಿಷಯಗಳನ್ನು ಹಂಚಬೇಕೆಂದು ಈ ಪೋಸ್ಟ್ ಬರೆಯುತ್ತಿದ್ದೇನೆ. ಈ ಪೋಸ್ಟ್ ಅಲ್ಲಿ ಈ ವರ್ಷದ ಯಶಸ್ವಿ ತಂಡಗಳಲ್ಲಿ ಎರಡಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಗುಜರಾತ್ ಟೈಟನ್ಸ್ ಬಗ್ಗೆ ಮಾತ್ರ ಹೇಳುತ್ತೇನೆ. Pic credits: Chennai Super Kings ಈ ವರ್ಷ ಚೆನ್ನೈ ತಂಡದಲ್ಲಿ ನಾನು ಗಮನಿಸಿದ ಹಾಗೆ ಒಂದೇ ಲಯದಲ್ಲಿ ಉತ್ತಮ ಬ್ಯಾಚಿಂಗ್ ಮಾಡಿದವರು ಡೇವನ್ ಕಾನ್ವೇ ಅವರು. ಚೆನ್ನೈ ತಂಡದ ಆರಂಭಿಕ ಜೋಡಿಯಾಗಿದ್ದ ಡುಪ್ಲೇಸಿಸ್-ಗಾಯಕ್ವಾಡ್ ಜೋಡಿ 2021ರಲ್ಲಿ ಅದ್ಭುತ ಜೊತೆಯಾಟವಾಡಿ ತಂಡ ಚಾಂಪಿಯನ್ ಆಗುವಲ್ಲಿ ಕೊಡುಗೆ ನೀಡಿತ್ತು. ಕಳೆದ ವರ್ಷ ಡುಪ್ಲೇಸಿಸ್ ಅವರು ಆರ್.ಸಿ.ಬಿ ತಂಡದ ಸೇರಿದ ನಂತರ ಅವರ ಸ್ಥಾನ ತುಂಬಲು ಒಬ್ಬ ಉತ್ತಮ ಆಟಗಾರನ ಅವಶ್ಯಕತೆ ಚೆನ್ನೈಗೆ ಇತ್ತು. ಪ್ರಾಮಾಣಿಕನಾಗಿ ಹೇಳುವುದಾದರೆ ನನಗೆ ಕಳೆದ ವರ್ಷ ಆರಂಭದಲ್ಲಿ ಕಾನ್ವೇ ಅವರ ಕಳಪೆ ಪ್ರದರ್ಶನ ನೋಡಿ ಯಾಕಾಗಿ ಚೆನ್ನೈ ಕಾನ್ವೆ ಅವರನ್ನು ಖರೀದಿಸಿತು ಎಂದು ಅನಿಸಿತ್ತು. ಆದರೆ ನಂತರ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಅವರು ಈ ವರ್ಷ ತಂಡದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಬಾರಿಸಿ ತನ್ನ ಸಾಮರ್ಥ್ಯ ತೋರಿಸಿಯೇ ಬಿಟ್ಟರು. ಡುಪ್ಲೇಸಿಸ್ ಅವರ ಸ್ಥಾನ ತುಂಬಲು ಒರ್ವ ಅರ್ಹ ವ್ಯಕ್ತಿ ಕಾನ್ವೆ ಆದರು. ಈ ವರ್ಷ ಕಾನ್ವೆ-ಗಾಯಕ್ವಾಡ್ ಅವರ ಜೋಡಿ ಚೆನ್ನೈ ಬ್ಯಾಟ