ನಾನು ಓದಿದ ಪುಸ್ತಕ "ಕಾರ್ಗಿಲ್ ಕದನ-ಕಥನ"
.jpg)
ಕಾರ್ಗಿಲ್ ಕದನ-ಕಥನ ಲೇಖಕರು: ಚಕ್ರವರ್ತಿ ಸುಲಿಬೆಲೆ 1999ರ ಇಸವಿಯಲ್ಲಿ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆದ ಯುದ್ಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಪುಸ್ತಕದಲ್ಲಿ ಲೇಖಕರಾದ ಸುಲಿಬೆಲೆಯವರು ಬರೆದಿರುತ್ತಾರೆ. ಲೇಖಕರು ಬಿ.ಎಸ್ಸಿ ಓದುತ್ತಿದ್ದಾಗ ಕಾಲೇಜಿಗೆ ಭೌತಶಾಸ್ತ್ರ ವಿಷಯದ ಪಾಠ ಮಾಡಲು ಬರುವ ಹೊಸ ಉಪನ್ಯಾಸಕರು ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕಥೆ ಹೇಳುತ್ತಾರೆ. ಇದನ್ನು ಕೇಳಿ ಕುತೂಹಲಗೊಂಡ ವಿದ್ಯಾರ್ಥಿಗಳ ಆಸಕ್ತಿಯನ್ನು ಕಂಡ ಉಪನ್ಯಾಸಕರು ಮುಂದೆ ನಡೆದ ಘಟನೆಗಳ ಬಗ್ಗೆ ಇಂಚಿಂಚಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಾ ನಮ್ಮ ದೇಶದ ಅಂದಿನ ಪ್ರಧಾನಿ ಶ್ರೀ ವಾಜಪೇಯಿಯವರು ಪಾಕಿಸ್ತಾನಕ್ಕೆ ಹೋಗಿ ಸ್ನೇಹದ ಪ್ರಸ್ತಾವವನ್ನು ಅಲ್ಲಿನ ಪ್ರಧಾನಿಯಾಗಿದ್ದ ನವಾಜ್ ಶರೀಫರ ಮುಂದಿಟ್ಟು ಭಾರತದಿಂದ ಲಾಹೋರಿಗೆ ಬಸ್ ಮತ್ತು ರೈಲ ಸೇವೆ ಆರಂಭವಾದ ಬಗ್ಗೆ ಹೇಳುತ್ತಾರೆ.ಈ ಪ್ರಸ್ತಾಪದ ಬಗ್ಗೆ ಸ್ವಲ್ಪವು ಇಷ್ಟವಿಲ್ಲದ ಅಲ್ಲಿನ ಸೇನಾ ಮುಖ್ಯಸ್ಥನಾಗಿದ್ದ ಪರ್ವೇಜ್ ಮುಷಾರಫ್ ಅದೇ ಸಮಯದಲ್ಲಿ ಭಾರತದ ಮೇಲೆ ಆಕ್ರಮಣ ಮಾಡುವ ಬಗ್ಗೆ ಹುನ್ನಾರ ಹೂಡುತ್ತಾನೆ. ಮುಂದಿನ ಕಥೆ ಎಲ್ಲರಿಗೆ ತಿಳಿದಿರುವಂತೆ ಭಯೋತ್ಪಾದಕರ ವೇಷದಲ್ಲಿ ಭಾರತ ನುಸುಳವ ಪಾಕಿಸ್ತಾನದ ಸೈನಿಕರ(ಆರಂಭಲ್ಲಿ ಉಗ್ರಗಾಮಿಗಳು ಎಂದೇ ಊಹಿಸಲಾಗಿತ್ತು) ಚಲನವಲನಗಳನ್ನು ಗಮನಿಸಿದ ಕುರಿಗಾಹಿಗಳು ತಕ್ಷಣವೇ ಭಾರತೀಯ ಸೇನೆಗೆ ಮಾಹಿತಿ ನೀಡುತ್ತಾರೆ.ತಕ್ಷ...